ಶಾಲಾ ಪರಿಸರ ಕ್ಲಬ್ ( Eco club ) ಮತ್ತು ಪೈವಳಿಕೆ ಕೃಷಿ ಭವನದ ಸಹಯೋಗದೊಂದಿಗೆ ಮಕ್ಕಳಿಗೆ ತರಕಾರಿ ಕೃಷಿ ಕುರಿತು ಕಾರ್ಯಾಗಾರ ನಡೆಸಲಾಯಿತು. ನಿವೃತ್ತ ಕೃಷಿ ಅಧಿಕಾರಿ ಕೇಶವ ರವರು ಈ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ಕೃಷಿ ಅಧಿಕಾರಿ ಪ್ರಜೇಶ್ ಶಾಲಾ ಮುಖ್ಯೋಪಧ್ಯಾಯ ಉಮೇಶ ಕೆ ರವರು ಉಪಸ್ಥಿತರಿದ್ದರು
ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ಧೂರ್ ಶಾಸ್ತ್ರಿ ರವರ ಜನ್ಮದಿನಾಚರಣೆ ಆಚರಿಸಲಾಯಿತು. ವಾರ್ಡ್ ಸದಸ್ಯೆ ಶ್ರೀ ಮತಿ ಜಯಲಕ್ಷ್ಮಿ ಭಟ್, ಎ.ಡಿ. ಎಸ್ ಅಧ್ಯಕ್ಷೆ ಶ್ರೀ ಮತಿ ಭವ್ಯ, ಶಾಲಾ ಮುಖ್ಯೋಪಧ್ಯಾಯ ಶ್ರೀ ಉಮೇಶ.ಕೆ ಉಪಸ್ಥಿತರಿದ್ದರು. ಸಾಮೂಹಿಕ ಪ್ರಾರ್ಥನೆ , ಶುಚೀಕರಣ ಗಾಂಧಿ ಮತ್ತು ಲಾಲ್ ಬಹದ್ಧೂರ್ ಶಾಸ್ತ್ರಿ ರವರ ಜೀವನದ ಕುರಿತು ವಿವರಿಸಲಾಯಿತು.
ಕೇರಳದ ನಾಡಹಬ್ಬವಾದ 'ಓಣಂ'ನ್ನು ನಮ್ಮ ಶಾಲೆಯಲ್ಲಿ ಕುಟುಂಬ ಶ್ರೀ 7ನೇ ವಾರ್ಡ ಬೆರಿಪದವು ಇದರ ಸಹಯೋಗ ದಲ್ಲಿ ಆಚರಿಸಲಾಯಿತು. ವಾರ್ಡ್ ಸದಸ್ಯೆ ಶ್ರೀಮತಿ ಜಯಲಕ್ಷ್ಮಿ ಭಟ್ , ಶಾಲಾ ಪಿ.ಟಿ.ಎ ಅಧ್ಯಕ್ಷ ಶಂಕರನಾರಾಯಣ ಬೆರಿಪದವು, ಕುಟುಂಬ ಶ್ರೀ ಎ.ಡಿ.ಎಸ್ ಅಧ್ಯಕ್ಷೆ ಶ್ರೀ ಮತಿ ಭವ್ಯ ಮತ್ತಿತರರು ಭಾಗವಹಿಸಿದ್ದರು. ಹೂವಿನ ರಂಗೋಲಿ ಬಿಡಿಸಿ ಮಹಾಬಲಿಯನ್ನು ಸ್ವಾಗತಿಸಲಾಯಿತು